ಕಾವೇರಿ ಕರ್ಮಕಾಂಡ!
ಪ್ರಚಲಿತ ವಿದ್ಯುನ್ಮಾನಗಳು ಕರ್ನಾಟಕದ ಜನತೆಗೆ ಬುದ್ಧಿ ಕಲಿಸುವುದೇ?
ಭಾರತದಲ್ಲೆಲ್ಲಾ ಮೋದಿಯದ್ದೇ ಅಲೆ! ಭಾರತಕ್ಕೆ "ಅಚ್ಛೇ ದಿನ್" ಬರುತ್ತಿದೆ! ಆದರೆ ಕರ್ನಾಟಕ ಭಾರತದಲ್ಲಿದೆಯೇ ಎಂಬುದೇ ಉತ್ತರಿಸಲಾಗದ ಪ್ರಶ್ನೆ!
ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಆಡಳಿತವಿದ್ದೂ, ಹಲವು ವಿಚಾರಗಳಲ್ಲಿ ರಾಜ್ಯಕ್ಕೆ ಉನ್ನತ ಪಟ್ಟ ಸಿಕ್ಕಿದೆ. ಹಾಗೆಂದು ಇದಕ್ಕೆಲ್ಲ ಕರ್ಣಾಟಕ ಕಾಂಗ್ರೆಸ್ ಕಾರಣ ಎಂದು ಹೇಳಿಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲಾ ಕೆಟ್ಟದ್ದಕ್ಕೂ ಹಿಂದಿನ ಸರ್ಕಾರಗಳನ್ನು ದೂಷಿಸುವ ಅಡಳಿತಾರೂಢಿ ಸರ್ಕಾರಗಳು, ಒಳ್ಳೆಯದಕ್ಕೂ ಹಿಂದಿನ ಸರ್ಕಾರಗಳ ಕೊಡುಗೆ ಇದೆ ಎಂದು ಒಪ್ಪಲಾರವು! ಎಲ್ಲದಕ್ಕಿಂತ ಹೆಚ್ಚಾಗಿ ಅಂಥ ಸ್ಥಾನಮಾನಗಳನ್ನು ರಕ್ಷಿಸಿಕೊಂಡು, ನಿಭಾಯಿಸಿಕೊಂಡು ಸಾಗುತ್ತಿರುವ ರಾಜ್ಯದ ಜನತೆಯನ್ನು ಪಕ್ಷಾತೀತವಾಗಿ ಸ್ಮರಿಸಬೇಕಾಗುತ್ತದೆ.
ಈಗ ಅದು ಪಕ್ಕಕ್ಕಿರಲಿ. ಸ್ವಲ್ಪ ಕರ್ನಾಟಕದ ಸುತ್ತ ಮುತ್ತ ತಿರುಗಾಡಿ ಬರುವ.
ಕೇರಳದಲ್ಲಿ ಓಣಂ ಸಡಗರ. ಕಾವೇರಿಯಲ್ಲಿ ಅತಿ ಕಮ್ಮಿ ಪಾಲು ಇರುವ ರಾಜ್ಯಗಳಲ್ಲಿ ಕೇರಳವೂ ಒಂದು. (ಪಾಂಡಿಚೇರಿ ಮತ್ತೊಂದು).
ಕೇರಳದಲ್ಲಿ ಸ್ಥಾಪನೆಯಾದ ವಿದ್ಯುತ್ ಸ್ಥಾವರಕ್ಕಾಗಿ ಕೊಡಗಿನ ಬಹುಭಾಗ ಅರಣ್ಯವನ್ನು ನಾಶ ಮಾಡಲಾಗಿದೆ. I mean, ಮರಗಳಿಗೆ ಕೊಡಲಿ ಇಟ್ಟು ಕಾವೇರಿಯ ಮೂಲಕ್ಕೇ ಕತ್ತರಿ ಹಾಕಿದಂತಾಗಿದೆ!
ಇದು ಅಷ್ಟಕ್ಕೇ ಮುಗಿಯುವುದಿಲ್ಲ. ಕೊಡಗಿಗೆ ರೈಲ್ವೇಯ ಅಗತ್ಯವೇನಿದೆಯೋ ಕಾಣೆ. ಆದರೆ ರೈಲ್ವೆಯ ಹೆಸರಲ್ಲಿಯೂ ಸಹ ಮರಗಳ ಮಾರಣ ಹೋಮವೇ ನಡೆಯುತ್ತಿದೆ! ಇಷ್ಟೆಲ್ಲಾ ನಡೆಯುವಾಗ ಕಾವೇರಿ ಕೊಳ್ಳದ ಜನ ಕಾವೇರಿ ನದಿಯಲ್ಲಿ ಹೆಚ್ಚು ನೀರು, ಮಳೆ ನಿರೀಕ್ಷಿಸುವುದು ನಿರಾಶಾವಾದವಲ್ಲದೆ ಮತ್ತಿನ್ನೇನು?
ಕೇರಳದಲ್ಲಿ ಓಣಂ ಸಡಗರ. ಕಾವೇರಿಯಲ್ಲಿ ಅತಿ ಕಮ್ಮಿ ಪಾಲು ಇರುವ ರಾಜ್ಯಗಳಲ್ಲಿ ಕೇರಳವೂ ಒಂದು. (ಪಾಂಡಿಚೇರಿ ಮತ್ತೊಂದು).
ಕೇರಳದಲ್ಲಿ ಸ್ಥಾಪನೆಯಾದ ವಿದ್ಯುತ್ ಸ್ಥಾವರಕ್ಕಾಗಿ ಕೊಡಗಿನ ಬಹುಭಾಗ ಅರಣ್ಯವನ್ನು ನಾಶ ಮಾಡಲಾಗಿದೆ. I mean, ಮರಗಳಿಗೆ ಕೊಡಲಿ ಇಟ್ಟು ಕಾವೇರಿಯ ಮೂಲಕ್ಕೇ ಕತ್ತರಿ ಹಾಕಿದಂತಾಗಿದೆ!
ಇದು ಅಷ್ಟಕ್ಕೇ ಮುಗಿಯುವುದಿಲ್ಲ. ಕೊಡಗಿಗೆ ರೈಲ್ವೇಯ ಅಗತ್ಯವೇನಿದೆಯೋ ಕಾಣೆ. ಆದರೆ ರೈಲ್ವೆಯ ಹೆಸರಲ್ಲಿಯೂ ಸಹ ಮರಗಳ ಮಾರಣ ಹೋಮವೇ ನಡೆಯುತ್ತಿದೆ! ಇಷ್ಟೆಲ್ಲಾ ನಡೆಯುವಾಗ ಕಾವೇರಿ ಕೊಳ್ಳದ ಜನ ಕಾವೇರಿ ನದಿಯಲ್ಲಿ ಹೆಚ್ಚು ನೀರು, ಮಳೆ ನಿರೀಕ್ಷಿಸುವುದು ನಿರಾಶಾವಾದವಲ್ಲದೆ ಮತ್ತಿನ್ನೇನು?
ತಮಿಳುನಾಡು! ಇದು ಪರರಾಜ್ಯಗಳ ಸಹಾಯ ಹಸ್ತದಿಂದ ಬೆಳೆದ ರಾಜ್ಯವೆಂದರೆ ತಪ್ಪಾಗಲಾರದು!
ಮುಲ್ಲಾ ಪೆರಿಯರ್'ಗಾಗಿ ಕೇರಳಿಗರೊಡನೆ, ಕಾವೇರಿಗಾಗಿ ಕನ್ನಡಿಗರೊಡನೆ, ಕೃಷ್ಣೆಗಾಗಿ ಕನ್ನಡಿಗರು ಮತ್ತು ತೆಲುಗರೊಡನೆ ಕಿತ್ತಾಡುವ ರಾಜ್ಯ ಎಂಬುದು ಸಾಮಾನ್ಯರ ಭಾವ. ಇದು ರಾಜಕೀಯದ ಆಯಾಮವೂ ಹೌದು. ಭಾಷಾ ರಾಜಕಾರಣಕ್ಕೆ ಹೆಸರುವಾಸಿಯಾದ ರಾಜ್ಯ. So called ರಾಷ್ಟ್ರೀಯ ಪಕ್ಷಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದ ರಾಜ್ಯ! ಹಿಂದೊಮ್ಮೆ ಇಡೀ ದಕ್ಷಿಣ ಭಾರತವೇ ಪ್ರತ್ಯೇಕ ರಾಷ್ಟ್ರವಾಗಬೇಕೆಂಬ ಬೇಡಿಕೆಯೊಡನೆ ಸದ್ದು ಮಾಡಿದ ನೆಲ. ಈಗೇಕೊ ಅದರ ಬಗ್ಗೆ ಹೆಚ್ಚು ಚಿಂತಿಸದೆ ರಾಜ್ಯ ರಾಜಕಾರಣದಲ್ಲಿ ಅಲ್ಲಿನ ಎಲ್ಲಾ ಪಕ್ಷಗಳು ಬ್ಯುಸಿಯಾಗಿವೆ.
ಮುಲ್ಲಾ ಪೆರಿಯರ್'ಗಾಗಿ ಕೇರಳಿಗರೊಡನೆ, ಕಾವೇರಿಗಾಗಿ ಕನ್ನಡಿಗರೊಡನೆ, ಕೃಷ್ಣೆಗಾಗಿ ಕನ್ನಡಿಗರು ಮತ್ತು ತೆಲುಗರೊಡನೆ ಕಿತ್ತಾಡುವ ರಾಜ್ಯ ಎಂಬುದು ಸಾಮಾನ್ಯರ ಭಾವ. ಇದು ರಾಜಕೀಯದ ಆಯಾಮವೂ ಹೌದು. ಭಾಷಾ ರಾಜಕಾರಣಕ್ಕೆ ಹೆಸರುವಾಸಿಯಾದ ರಾಜ್ಯ. So called ರಾಷ್ಟ್ರೀಯ ಪಕ್ಷಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದ ರಾಜ್ಯ! ಹಿಂದೊಮ್ಮೆ ಇಡೀ ದಕ್ಷಿಣ ಭಾರತವೇ ಪ್ರತ್ಯೇಕ ರಾಷ್ಟ್ರವಾಗಬೇಕೆಂಬ ಬೇಡಿಕೆಯೊಡನೆ ಸದ್ದು ಮಾಡಿದ ನೆಲ. ಈಗೇಕೊ ಅದರ ಬಗ್ಗೆ ಹೆಚ್ಚು ಚಿಂತಿಸದೆ ರಾಜ್ಯ ರಾಜಕಾರಣದಲ್ಲಿ ಅಲ್ಲಿನ ಎಲ್ಲಾ ಪಕ್ಷಗಳು ಬ್ಯುಸಿಯಾಗಿವೆ.
ಇನ್ನು ಆಂಧ್ರ ಇತ್ತೀಚೆಗೆ ಇಬ್ಬಾಗವಾಗಿದೆ! ತೆಲಂಗಾಣ ಹೊಸ ರಾಜ್ಯ. ಇಂಥದ್ದೇ ಬೇಡಿಕೆ ಮಹಾರಾಷ್ಟ್ರದ ವಿದರ್ಭ, ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಕಾಸರಗೂಡಿನಲ್ಲಿ ತುಳುನಾಡು, ಮತ್ತು ಕೊಡವನಾಡುಗಳ ಪ್ರತ್ಯೇಕ ರಾಜ್ಯಗಳಿಗೆ ಧನಿ ಮೂಡಿದೆ. ತೆಲಂಗಾಣ ಮಾತ್ರ ಪ್ರತ್ಯೇಕ ರಾಜ್ಯವಾಗಲು ಸಂಪೂರ್ಣವಾಗಿ ಯಶಸ್ವಿಯಾಗಿದ್ದು ಅಖಂಡ ಆಂಧ್ರದ ರಾಜಧಾನಿಯಾಗಿದ್ದ ಹೈದರಾಬಾದನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಸೀಮಾಂಧ್ರ ಭಾಗಕ್ಕೆ ಹೊಸ ರಾಜಧಾನಿ ಹುಡುಕಿಕೊಳ್ಳುವ ಸಮಸ್ಯೆ ತಂದೊಡ್ಡಿದೆ. ಸೀಮಾಂಧ್ರಕ್ಕೆ ಈಗ ಅಮರಾವತಿಯ ಮೇಲೆ ಕಣ್ಣು!
ಅದನ್ನು ಅಭಿವೃದ್ಧಿಪಡಿಸಲು ಒಂದಷ್ಟು ರಾಜಕೀಯ ತಂತ್ರಗಾರಿಕೆ ಅತ್ಯಗತ್ಯ.
ಅದನ್ನು ಅಭಿವೃದ್ಧಿಪಡಿಸಲು ಒಂದಷ್ಟು ರಾಜಕೀಯ ತಂತ್ರಗಾರಿಕೆ ಅತ್ಯಗತ್ಯ.
ಗುಜರಾತ್! ರಾಷ್ಟ್ರದ ಪ್ರಧಾನಿಯ ತವರು. ಡಿಜಿಟಲ್ ಲೋಕದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಹೊಂದಿರುವ ರಾಜ್ಯ ಎಂಬಂತೆ ಬಂಬಿತವಾದ ರಾಜ್ಯ. ಆದರೆ ವಾಸ್ತವ ತೀರಾ ಭಿನ್ನ!
ಇವೆಲ್ಲವುದರ ನಡುವೆಯೂ ಕೇರಳಾ ಮತ್ತು ಕರ್ಣಾಟಕ ಅದೆಷ್ಟೋ ಉತ್ತಮ ವಿಚಾರಗಳಲ್ಲಿ ಉನ್ನತ ಸ್ಥಾನ ಗಳಿಸಿದೆ.
ಕರ್ಣಾಟಕ-ಭಾರತದ ರಾಜಕೀಯ ಇತಿಹಾಸದ ಎಂದೂ ಸಹ ಎರಡೂ ಕಡೆ, ಎಂದರೆ ರಾಜ್ಯದ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರವಿದ್ದ ಉದಾಹರಣೆಗೆ ಸಿಗುವುದಿಲ್ಲ. ಪ್ರಸ್ತುತ ಉದಾಹರಣೆಯೇ ತೆಗೆದುಕೊಳ್ಳಿ. ಇಂದು ಕರ್ನಾಟಕದಲ್ಲಿ ಕಾಂಗ್ರೆಸ್ ಇದ್ದರೆ ಕೇಂದ್ರದಲ್ಲಿ ಭಾಜಪಾ ಇದೆ! ಈ ಸಂಗತಿಯು ಕರ್ನಾಟಕದ ಹಿತಾಸಕ್ತ ರಾಜಕಾರಣಕ್ಕೆ ಪ್ರತಿಬಾರಿಯೂ ತಣ್ಣೀರೆರಚಿರುವುದಂತು ನಿಜ!
ರಾಜಧಾನಿಯಲ್ಲಿಯೇ ಪರಭಾಷಿಕರ ಧಾಂದಲೆ, ಕನ್ನಡದ ಅವಗಣನೆ, ಕನ್ನಡಿಗರ ಕಡೆಗಣನೆ, ಹುಸಿ ರಾಷ್ಟ್ರೀಯತೆ, ಧರ್ಮಾಂಧತೆ, ಅರ್ಥ ಕಳೆದುಕೊಂಡ ಜಾತ್ಯಾತೀತ ತತ್ವ ಸಿದ್ಧಾಂತ, ಭಾರತದ ನೆಲಕ್ಕೆ ಹೊಂದದ ಕಮ್ಯುನಿಸಂ, ಇತ್ಯಾದಿ ರಾಜಕೀಯ ದೃಷ್ಟಿಕೋನಗಳಿಂದ ಕರ್ನಾಟಕದ ರಾಜಕಾರಣ ಅಸ್ಥಿರತೆ ಎದುರಿಸಿದರೂ ಸಹ ಬೆಳವಣಿಗೆಯಲ್ಲೇನು ಹಿಂದೆ ಬೀಳಲಿಲ್ಲ. ಸ್ಥಳಿಯ ರಾಜಕಾರಣಿಗಳ ನಿರಾಸಕ್ತಿಯಿಂದ ಉತ್ತರ ಕರ್ನಾಟಕ ಭಾಗ ನಿರ್ಲಕ್ಷ್ಯಕ್ಕೊಳಗಾಯ್ತು ಎಂಬ ಆಪಾದನೆಯೊಂದನ್ನು ಬಿಟ್ಟರೆ, ಮಿಕ್ಕವೆಲ್ಲಾ ಅದ್ವಿತೀಯ!
ಕೇವಲ ಬೆಳವಣಿಗೆ ಮತ್ತು ಅಭಿವೃದ್ಧಿಯ ವಿಚಾರಗಳಲ್ಲೇ ಕೇರಳ ಮತ್ತು ಕರ್ನಾಟಕ ಅಂತಹ "ಮಾದರಿ ಗುಜರಾತ" ಎಂದು ಬಿಂಬಿತವಾದ ಪ್ರಧಾನಿಯ ತವರೂರನ್ನೇ ಹಿಂದಿಕ್ಕಿದ್ದು ಏನು ಸುಳ್ಳಲ್ಲ! ಮೊದಲೇ ಹೇಳಿದಂತೆ ಇದಕ್ಕೆಲ್ಲಾ ಕಾಂಗ್ರೆಸ್ ಕಾರಣ ಎಂದು ಪಟ್ಟಿ ಕಟ್ಟಿಕೊಳ್ಳುವುದೂ ಸಹ ಹಾಸ್ಯಾಸ್ಪದ ಸಂಗತಿಯೆ!
ಇಂಥಹ ಕರ್ನಾಟಕವು ಅದೆಷ್ಟು ಪರರಾಜ್ಯಗಳ ಕಣ್ಣುರಿಸಿರಬಹುದು?
ಇದಕ್ಕೆ ರಾಜಕೀಯ ಆಯಾಮ ತೊಡಿಸಿ ಯೋಚಿಸಿ!
ಬೇರಾವ ವಿಚಾರಕ್ಕೂ ಭುಗಿಲೇಳದಷ್ಟು ಆಕ್ರೋಶ ಕಾವೇರಿ ನದಿ ನೀರು ಹಂಚಿಕೆಯ ವಿಚಾರಕ್ಕೆಯೇ ಭುಗಿಲೇಳುವುದಕ್ಕೆ ಒಂದು ಪ್ರಬಲ ಕಾರಣವಿದೆ. ಅದೇ ರಾಜಧಾನಿ ಬೆಂಗಳೂರು!
ಅಖಂಡ ಕರ್ನಾಟಕದ ೧೭೫ ತಾಲ್ಲೂಕುಗಳ ನಿವಾಸಿಗಳಲ್ಲಿ ೧೦೦ಕ್ಕೆ ಕನಿಷ್ಠ ೫-೭ ಜನ ಬೆಂಗಳೂರಿನಲ್ಲಿ ವಾಸಿಸುತ್ತಾರೆ!
ಕರ್ಣಾಟಕದಲ್ಲಿ ಅತಿ ಹೆಚ್ಚು ತೆರಿಗೆ ವಸೂಲಿಯಾಗುವ, ವ್ಯವಹಾರ ವಹಿವಾಟುಗಳು ನಡೆಯುವುದು ಬೆಂಗಳೂರಿನಲ್ಲಿ. ಸಿಲಿಕಾನ್ ವ್ಯಾಲಿ, ಐಟಿ ಸಿಟಿ ಎಂದೇ ಹೆಸರುವಾಸಿಯಾದ ಬೆಂಗಳೂರು ಕೇವಲ ಕರ್ನಾಟಕದ ಜನರಿಗಷ್ಟೇ ಅಲ್ಲದೇ, ಪರರಾಜ್ಯಗಳ ವಲಸಿಗರಿಗೂ ಸ್ವರ್ಗ ಎನಿಸಿಕೊಂಡಿದೆ. ಉದ್ಯೋಗಾವಕಾಶಗಳ ಬಲೆಯಾಗಿದೆ. ಇಲ್ಲಿನ ವಾಯುಗುಣ, ಹವಾಮಾನ ಪ್ರಕೃತಿಯ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ! ಉತ್ತರ ಭಾರತಕ್ಕೆ ದಿಲ್ಲಿ ಕೇಂದ್ರವಾದರೆ ಅದಕ್ಕೆ ದಕ್ಷಿಣದಲ್ಲಿ ಸರಿಸಮನಾಗಿ ನಿಲ್ಲಬಲ್ಲ ಏಕೈಕ ನಗರ ಬೆಂಗಳೂರು!
ಬೇರಾವ ವಿಚಾರಕ್ಕೂ ಭುಗಿಲೇಳದಷ್ಟು ಆಕ್ರೋಶ ಕಾವೇರಿ ನದಿ ನೀರು ಹಂಚಿಕೆಯ ವಿಚಾರಕ್ಕೆಯೇ ಭುಗಿಲೇಳುವುದಕ್ಕೆ ಒಂದು ಪ್ರಬಲ ಕಾರಣವಿದೆ. ಅದೇ ರಾಜಧಾನಿ ಬೆಂಗಳೂರು!
ಅಖಂಡ ಕರ್ನಾಟಕದ ೧೭೫ ತಾಲ್ಲೂಕುಗಳ ನಿವಾಸಿಗಳಲ್ಲಿ ೧೦೦ಕ್ಕೆ ಕನಿಷ್ಠ ೫-೭ ಜನ ಬೆಂಗಳೂರಿನಲ್ಲಿ ವಾಸಿಸುತ್ತಾರೆ!
ಕರ್ಣಾಟಕದಲ್ಲಿ ಅತಿ ಹೆಚ್ಚು ತೆರಿಗೆ ವಸೂಲಿಯಾಗುವ, ವ್ಯವಹಾರ ವಹಿವಾಟುಗಳು ನಡೆಯುವುದು ಬೆಂಗಳೂರಿನಲ್ಲಿ. ಸಿಲಿಕಾನ್ ವ್ಯಾಲಿ, ಐಟಿ ಸಿಟಿ ಎಂದೇ ಹೆಸರುವಾಸಿಯಾದ ಬೆಂಗಳೂರು ಕೇವಲ ಕರ್ನಾಟಕದ ಜನರಿಗಷ್ಟೇ ಅಲ್ಲದೇ, ಪರರಾಜ್ಯಗಳ ವಲಸಿಗರಿಗೂ ಸ್ವರ್ಗ ಎನಿಸಿಕೊಂಡಿದೆ. ಉದ್ಯೋಗಾವಕಾಶಗಳ ಬಲೆಯಾಗಿದೆ. ಇಲ್ಲಿನ ವಾಯುಗುಣ, ಹವಾಮಾನ ಪ್ರಕೃತಿಯ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ! ಉತ್ತರ ಭಾರತಕ್ಕೆ ದಿಲ್ಲಿ ಕೇಂದ್ರವಾದರೆ ಅದಕ್ಕೆ ದಕ್ಷಿಣದಲ್ಲಿ ಸರಿಸಮನಾಗಿ ನಿಲ್ಲಬಲ್ಲ ಏಕೈಕ ನಗರ ಬೆಂಗಳೂರು!
ಇದೆಲ್ಲಕ್ಕೂ ಹಲವು ಅಂಶಗಳು ಕೊಡುಗೆ ಕೊಟ್ಟಿವೆ. ಆದರೆ ಕಾವೇರಿ ನದಿ ನೀರಿನ ಕೊಡುಗೆ ಅಪಾರ!
ಬೆಂಗಳೂರು, ಮೂಲಭೂತ ಸೌಕರ್ಯಗಳೊಂದಿದೆ ಒಂದು ಸುಸಜ್ಜಿತ ನಗರವಾಗಿ ರೂಪುಗೊಂಡಿರುವುದರಲ್ಲಿ ಕಾವೇರಿಯ ಪಾತ್ರ ಪ್ರಮುಖವಾದುದು.
ಬೆಂಗಳೂರು, ಮೂಲಭೂತ ಸೌಕರ್ಯಗಳೊಂದಿದೆ ಒಂದು ಸುಸಜ್ಜಿತ ನಗರವಾಗಿ ರೂಪುಗೊಂಡಿರುವುದರಲ್ಲಿ ಕಾವೇರಿಯ ಪಾತ್ರ ಪ್ರಮುಖವಾದುದು.
ನಾಡಪ್ರಭು ಕೆಂಪೇಗೌಡರ ಕಾಲಕ್ಕೆ ಬೆಂಗಳೂರು ನೀರು ಸರಬರಾಜಿನ ವಿಚಾರದಲ್ಲಿ ಸ್ವತಂತ್ರವಾಗಿತ್ತು. ಅದಕ್ಕೆ ಕಾರಣ ಅಂದು ಬೆಂಗಳೂರಿನಲ್ಲಿದ್ದ ಅಸಂಖ್ಯಾತ ಕೆರೆ ತೊರೆಗಳು!
ನಗರೀಕರಣದ ಹೊಡೆತಕ್ಕೆ ಸಿಕ್ಕಿ ಭಾಗಶಃ ೮೦-೮೫% ಕೆರೆಗಳು ಇಂದು ಬಹುಮಹಡಿ ಕಟ್ಟಡಗಳನ್ನು, ಜನವಸತಿ ಬಡಾವಣೆಗಳನ್ನು ಹೊತ್ತು ನಿಂತಿದೆ. ಇಂದು ಬೆಂಗಳೂರು ಕಾವೇರಿಯ ಮೇಲೆ ಅವಲಂಬಿಸಿದೆ.
ನಗರೀಕರಣದ ಹೊಡೆತಕ್ಕೆ ಸಿಕ್ಕಿ ಭಾಗಶಃ ೮೦-೮೫% ಕೆರೆಗಳು ಇಂದು ಬಹುಮಹಡಿ ಕಟ್ಟಡಗಳನ್ನು, ಜನವಸತಿ ಬಡಾವಣೆಗಳನ್ನು ಹೊತ್ತು ನಿಂತಿದೆ. ಇಂದು ಬೆಂಗಳೂರು ಕಾವೇರಿಯ ಮೇಲೆ ಅವಲಂಬಿಸಿದೆ.
ಕರ್ಣಾಟಕದಲ್ಲಿ ದಕ್ಷಿಣ ಕೇಂದ್ರಿತ ಅಭಿವೃದ್ಧಿ ಇರುವ ಕಾರಣ ಕಾವೇರಿ ಕೊಳ್ಳದ ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ತುಮಕೂರುಗಳ ಬೆಳವಣಿಗೆಯಲ್ಲಿಯೂ ಸಹ ಕಾವೇರಿಯದ್ದು ಬಹುಮುಖ್ಯ ಪಾತ್ರ!
ಆದರೆ ಕರ್ನಾಟಕಕ್ಕೆ ಭಾರತ ಒಕ್ಕೂಟದಲ್ಲಿ ಕೇಂದ್ರದಿಂದ ಆದ ಅನ್ಯಾಯಗಳು ಕರ್ನಾಟಕದ ಎಲ್ಲಾ ಪ್ರಾಂತ್ಯಗಳಿಗೂ ಹಂಚಲಾಗಿದೆ!
ಅದರಲ್ಲೂ ಕಾವೇರಿಯ ವಿಚಾರಕ್ಕೆ ಆದ ಅನ್ಯಾಯ ಅತಿ ದೊಡ್ಡದ್ದು!
ಉಚ್ಛ ನ್ಯಾಯಾಲಯ ಕಾವೇರಿ ವಿಷಯದಲ್ಲಿ "ಹುಚ್ಚ ನ್ಯಾಯಾಲಯ"ವಾಗಿದ್ದಂತು ನಿಜ!
ಮಹದಾಯಿ ವಿಚಾರದಲ್ಲೂ ಗಾಯದ ಮೇಲೆ ಬರೆ!
ಕೃಷ್ಷೆಯ ವಿಚಾರದಲ್ಲಂತು ಒಂದೆಜ್ಜೆ ಮುಂದೆ ಸಾಗಿ ತುಂಗಭದ್ರಾ ಅಣೆಕಟ್ಟನ್ನೇ ಕಿತ್ತುಕೊಂಡಿದೆ ಕೇಂದ್ರ ಸರ್ಕಾರ! ಈ ವಿಷಯ ಬಹಳಷ್ಟು ಕನ್ನಡಿಗರಿಗೆ ತಿಳಿದೇ ಇಲ್ಲ!
ಇನ್ನೂ ಈಗ KRS, ಹಾರಂಗಿ, ಗೋರೂರು, ಯಗಚಿ ಇತ್ಯಾದಿ ಕಾವೇರಿ ಕೊಳ್ಳದ ಅಣೆಕಟ್ಟುಗಳನ್ನು ಕೇಂದ್ರ ಸರ್ಕಾರ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ!
ಇದನ್ನು ನಾಲ್ಕು ವಾರಗಳಲ್ಲಿ ಮಾಡುವಂತೆ ನಮ್ಮ ಭಾರತದ ಹುಚ್ಚ ನ್ಯಾಯಾಲಯವು, ಭಾರತ ಸರ್ಕಾರಕ್ಕೆ ಆದೇಶಿಸಿರುವುದು.
ಕಾವೇರಿ ಕೊಳ್ಳದ ಬಹಳಷ್ಟು ಅಣೆಕಟ್ಟುಗಳು ರಾಜಮಹಾರಾಜರ ಸಾರ್ವಜನಿಕ ರೈತರ ಆಸ್ತಿ!
KRS ನಿರ್ಮಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಅರಸಿಯರ ಮೂಟೆಗಟ್ಟಲೆ ಒಡವೆಗಳನ್ನು ಬಾಂಬೆಯ ಚೀನಿವಾರ ಪೇಟೆಯಲ್ಲಿ ಹರಾಜು ಹಾಕಿ ದುಡ್ಡು ತಂದು ಕಟ್ಟಿಸಿದ್ದಾರೆ!
ಮಂಡ್ಯ ಮೈಸೂರಿನ ಸುತ್ತಮುತ್ತಲಿನ ಸಾರ್ವಜನಿಕರು ರೈತರು, ತಮ್ಮ ಮನೆಯ ಕೆಲಸವೇನೋ ಎಂಬಂತೆ ಎತ್ತಿನಬಂಡಿಗಳನ್ನು ಕಟ್ಟಿಕೊಂಡು ಬಂದು ಕನ್ನಂಬಾಡಿಯಲ್ಲಿ ಅಣೆಕಟ್ಟೆಯ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.
KRS ನಿರ್ಮಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಅರಸಿಯರ ಮೂಟೆಗಟ್ಟಲೆ ಒಡವೆಗಳನ್ನು ಬಾಂಬೆಯ ಚೀನಿವಾರ ಪೇಟೆಯಲ್ಲಿ ಹರಾಜು ಹಾಕಿ ದುಡ್ಡು ತಂದು ಕಟ್ಟಿಸಿದ್ದಾರೆ!
ಮಂಡ್ಯ ಮೈಸೂರಿನ ಸುತ್ತಮುತ್ತಲಿನ ಸಾರ್ವಜನಿಕರು ರೈತರು, ತಮ್ಮ ಮನೆಯ ಕೆಲಸವೇನೋ ಎಂಬಂತೆ ಎತ್ತಿನಬಂಡಿಗಳನ್ನು ಕಟ್ಟಿಕೊಂಡು ಬಂದು ಕನ್ನಂಬಾಡಿಯಲ್ಲಿ ಅಣೆಕಟ್ಟೆಯ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.
ಹೀಗಿರುವಾಗ ಯಾವ ನೈತಿಕತೆಯ ಹಕ್ಕಿನಿಂದ ಕೇಂದ್ರಕ್ಕೆ ಕಾವೇರಿ ಕೊಳ್ಳದ ಅಣೆಕಟ್ಟುಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತದೆ?
ಮಹದಾಯಿ, ಕೃಷ್ಣೆ, ಕಾವೇರಿ ವಿಚಾರಗಳನ್ನು ಕೇವಲ ಜಲವಿವಾದಗಳಾಗಿ ನೋಡದೆ, ಇದರ ಹಿಂದಿನ ರಾಜಕೀಯ ಷಡ್ಯಂತ್ರವನ್ನು ಕೆದಕುತ್ತಾ ಹೋದರೆ ಕೆಲವು ರೋಚಕ ಸಂಗತಿಗಳು ಹೊರಬರುತ್ತವೆ!
ಕರ್ನಾಟಕದ ಏಳಿಗೆಯನ್ನು ಸಹಿಸದ ಪರದೇಸಿ ಹಿತಾಸಕ್ತಿಗಳ ಕೈವಾಡ ಇಲ್ಲಿ ಕಾಣುತ್ತದೆ!
ಕಾವೇರಿ ನೀರೊಂದು ಇಲ್ಲವೆಂದಾದರೆ ಮೂಲ ಸೌಕರ್ಯದಿಂದ ವಂಚಿತವಾಗುವ ಬೆಂಗಳೂರಿಗೆ ವಿದ್ಯುತ್ತಿನ ಅಭಾವವಾಗುವುದೂ ಸಹ ಖಂಡಿತ. ಕರ್ನಾಟಕ ಬಳಸುವ ೧೦೦% ವಿದ್ಯುತ್ತಿನಲ್ಲಿ ಕೇವಲ ೪-೫% ವಿದ್ಯುತ್ ಮಾತ್ರವನ್ನು ತಮಿಳುನಾಡಿನಿಂದ "ಕೊಂಡುಕೊಳ್ಳಲಾಗುತ್ತದೆ".
ಕಾವೇರಿ ನೀರೊಂದು ಇಲ್ಲವೆಂದಾದರೆ ಮೂಲ ಸೌಕರ್ಯದಿಂದ ವಂಚಿತವಾಗುವ ಬೆಂಗಳೂರಿಗೆ ವಿದ್ಯುತ್ತಿನ ಅಭಾವವಾಗುವುದೂ ಸಹ ಖಂಡಿತ. ಕರ್ನಾಟಕ ಬಳಸುವ ೧೦೦% ವಿದ್ಯುತ್ತಿನಲ್ಲಿ ಕೇವಲ ೪-೫% ವಿದ್ಯುತ್ ಮಾತ್ರವನ್ನು ತಮಿಳುನಾಡಿನಿಂದ "ಕೊಂಡುಕೊಳ್ಳಲಾಗುತ್ತದೆ".
ಇಂತಹ ಅವ್ಯವಸ್ಥೆಗಳಿಂದಾಗಿ ಬೆಂಗಳೂರನ್ನು ಹೈರಾಣಾಗಿಸುವ ಸಾಧ್ಯತೆಗಳಿವೆ! ಪಕ್ಕದ ರಾಜ್ಯವೊಂದು ಇಬ್ಬಾಗವಾಗಿ ಹೊಸ ರಾಜಧಾನಿಯನ್ನು ಹೇಗೆ ಅಭಿವೃದ್ಧಿಗೊಳಿಸುವುದು ಎಂದು ಕಾಯುತ್ತಾ, ಈ ಬೆಂಗಳೂರಿನ ಅವಸ್ಥೆಯನ್ನು ಎನ್ಕ್ಯಾಷ್ ಮಾಡಿಕೊಳ್ಳುವ ಸಾಧ್ಯತೆ ಇದೆ!
ಜಲ ಮತ್ತು ವಿದ್ಯುತ್ತಿನ ಅಭಾವವನ್ನು ಬೆಂಗಳೂರು ಎದುರಿಸುವಂತಾದರೆ, ನಿಜಕ್ಕೂ ಅದರ ದುಷ್ಪರಿಣಾಮ ರಾಜ್ಯದ ಆರ್ಥಿಕತೆಯ ಮೇಲೆ ಬೀರಬಹುದು. ಐಟಿ ಸೆಕ್ಟಾರ್, ಕೈಗಾರಿಕೆಗಳು, ಇತ್ಯಾದಿ ಕರ್ನಾಟಕದಿಂದ ವರ್ಗವಾಗುವುದು ಪರರಾಜ್ಯಗಳಿಗೆ ತಮ್ಮ ಹಿತಾಸಕ್ತಿ ಅವಕಾಶ ಮಾಡಿಕೊಡುವುದಂತು ನಿಜ. ಹೊಸ ರಾಜ್ಯವಾದ ಸೀಮಾಂಧ್ರದ ಹೊಸ ರಾಜಧಾನಿ ಅಮರಾವತಿ, ತೆಲಂಗಾಣದ ಹೈದರಾಬಾದ್, ಮತ್ತು ತಮಿಳುನಾಡಿನ ಇತರೇ ನಗರಗಳಿಗೆ ಶಿಫ್ಟ್ ಆಗುವುದಂತು ನಿಜ.
ಇನ್ನು ಕೇಂದ್ರದಲ್ಲಿ ತನ್ನದ್ದಲ್ಲದ ಸರ್ಕಾರ ರಾಜ್ಯದಲ್ಲಿರುವುದರಿಂದ ಅದಕ್ಕೆ ನಮ್ಮ ರಾಜ್ಯದ ಹಿತಾಸಕ್ತಿ ಮುಖ್ಯವೆನಿಸದು! ಬದಲಿಗೆ ಆದಷ್ಟು ತುಚ್ಛೀಕರಿಸುವ ಪ್ರಯತ್ನವನ್ನಂತೂ ಮಾಡದೆ ಇರದು!
ರಾಜ್ಯದ ಮುಖ್ಯಮಂತ್ರಿಗಳು ದೇಶದ ಪ್ರಧಾನಿಗೆ ೬-೭ ಪತ್ರಗಳು ಬರೆದರೂ ಪ್ರಧಾನಿ ಪ್ರತಿಕ್ರಿಯೆ ನೀಡಲಿಲ್ಲ ಎಂಬ ವಿಚಾರವನ್ನೇ ಪರಿಗಣಿಸಿದರೆ, ರಾಜ್ಯ ಸರ್ಕಾರವು ಪತ್ರ ಬರೆದರೂ ಪ್ರತಿಕ್ರಿಯೆ ಇಲ್ಲ ಎಂದು ಸುದ್ಧಿ ಹಬ್ಬಿಸಿ ಕೇಂದ್ರ ಸರ್ಕಾರದ ಮತ್ತು ದೇಶದ ಪ್ರಧಾನಿಯ ಅಸಡ್ಡೆಯ ಬಗ್ಗೆ ತೋರಿ ಅದರ ಮೇಲೆ ಆಪಾದನೆ ಒರೆಸುತ್ತಿದೆ ಎನ್ನಬೇಕೇ? ಅಥವ ಅದೇ ಸತ್ಯ ಎಂದು ಪರಿಗಣಿಸಬೇಕೆ?
ಇಂದು ನಮ್ಮ ರಾಜ್ಯದ ಮುಖ್ಯಮಂತ್ರಿ ತನ್ನ ರಾಜ್ಯದ ಪ್ರಜೆಗಳ ಹಿತಾಸಕ್ತಿಯ ಬಗ್ಗೆ ಏನೇ ನಿರ್ಧಾರ ತೆಗೆದುಕೊಳ್ಳ ಬೇಕಿದ್ದರೂ ಸಹ ದಿಲ್ಲಿಯ ಹೈಕಮಾಂಡ್ ಆದೇಶಕ್ಕಾಗಿ ಕಾಯುವಂತಾಗಿದೆ!
ಇನ್ನು ರಾಜ್ಯದ ೧೭-೧೮ ಸಂಸದರ ಸ್ಥಿತಿಯೇನೂ ಭಿನ್ನವಾಗಿಲ್ಲ! ರಾಜ್ಯದ ಹಿತಕ್ಕಾಗಿ ಏನೇ ಮಾತಾಡಬೇಕಾದರೂ, ಏನೇ ನಿಲುವುಗಳನ್ನು ಪ್ರಕಟಿಸಬೇಕಾದರೂ ನಾಗಪುರದ ಹೈಕಮಾಂಡ್, sorry sorry, ದಿಲ್ಲಿಯ ಹೈಕಮಾಂಡ್'ನ ಆದೇಶಕ್ಕಾಗಿ ಕಾಯುವಂತಾ ದುಸ್ಥಿತಿಯು ಎಲ್ಲಾ so called ರಾಷ್ಟ್ರೀಯ ಪಕ್ಷಗಳಿಗಿದೆ!
ಅದು ಈಗಿನ ಕಾಂಗ್ರೆಸ್ ಪಕ್ಷ, ಆಗಿನ ಭಾಜಪ ಪಕ್ಷ ಯಾವುದನ್ನೂ ಬಿಟ್ಟಿಲ್ಲ! ಇದೊಂದು ರೀತಿ ಆಧುನಿಕ ಗುಲಾಮಗಿರಿಯಾಗಿದೆ. ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರಗಳ ಕೆಸರೆರಚಾಟ ಕನ್ನಡಿಗರನ್ನು ಅನಾಥ ಪ್ರಜ್ಞೆಯಲ್ಲಿ ಮುಳುಗುವಂತೆ ಮಾಡಿದೆ!
ಇನ್ನು ರಾಜ್ಯದ ೧೭-೧೮ ಸಂಸದರ ಸ್ಥಿತಿಯೇನೂ ಭಿನ್ನವಾಗಿಲ್ಲ! ರಾಜ್ಯದ ಹಿತಕ್ಕಾಗಿ ಏನೇ ಮಾತಾಡಬೇಕಾದರೂ, ಏನೇ ನಿಲುವುಗಳನ್ನು ಪ್ರಕಟಿಸಬೇಕಾದರೂ ನಾಗಪುರದ ಹೈಕಮಾಂಡ್, sorry sorry, ದಿಲ್ಲಿಯ ಹೈಕಮಾಂಡ್'ನ ಆದೇಶಕ್ಕಾಗಿ ಕಾಯುವಂತಾ ದುಸ್ಥಿತಿಯು ಎಲ್ಲಾ so called ರಾಷ್ಟ್ರೀಯ ಪಕ್ಷಗಳಿಗಿದೆ!
ಅದು ಈಗಿನ ಕಾಂಗ್ರೆಸ್ ಪಕ್ಷ, ಆಗಿನ ಭಾಜಪ ಪಕ್ಷ ಯಾವುದನ್ನೂ ಬಿಟ್ಟಿಲ್ಲ! ಇದೊಂದು ರೀತಿ ಆಧುನಿಕ ಗುಲಾಮಗಿರಿಯಾಗಿದೆ. ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರಗಳ ಕೆಸರೆರಚಾಟ ಕನ್ನಡಿಗರನ್ನು ಅನಾಥ ಪ್ರಜ್ಞೆಯಲ್ಲಿ ಮುಳುಗುವಂತೆ ಮಾಡಿದೆ!
ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಎಕ್ಕುಟ್ಟೋಗಬೇಕು. ಅದು ರಾಜ್ಯದ ಕಾಂಗ್ರೆಸ್ ಸರ್ಕಾರದ ತಲೆಗೆ ಕಟ್ಟಿ ಅದನ್ನು ಮುಂದಿನ ಚುನಾವಣೆಯಲ್ಲಿಯ ಸರಕಾಗಿಸಿಕೊಂಡು ಕಾಂಗ್ರೆಸ್ ಪುನಃ ಕರ್ನಾಟಕಲ್ಲಿ ಅಧಿಕಾರಕ್ಕೆ ಬಾರದಂತೆ ನಿರ್ವಹಿಸಬೇಕು!
ರಾಜ್ಯ ಸರ್ಕಾರವು ಅಸಹಾಯಕ ಸ್ಥಿತಿಯಲ್ಲಿ ಎಲ್ಲವನ್ನು ಕೇಂದ್ರ ಸರ್ಕಾರವೇ ಮಾಡಿದ್ದು ಎಂಬಂತೆ ಆಪಾದನೆಯನ್ನು ಹೊರೆಸಿ ಕೇಂದ್ರ ಸರ್ಕಾರವನ್ನು ದೂಷಿಸಬೇಕು!
ಪ್ರಚಾರ ಹೆಚ್ಚಾದಂತೆಲ್ಲಾ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಮೇಲೆ ನಿರೀಕ್ಷೆ ಹೆಚ್ಚುತ್ತಿತ್ತು. ಇವರದು ವಿಭಿನ್ನ ವ್ಯಕ್ತಿತ್ವ, ಭಾರತದ ಬಹಳಷ್ಟು ಸಮಸ್ಯೆಗಳು ಇವರಿಂದ ಪರಿಹಾರವಾಗುತ್ತವೆ, ಭಾರತಕ್ಕೆ ಓರ್ವ ಮಹಾನ್ ನಾಯಕ ಸಿಕ್ಕಿದ ಎಂದುಕೊಂಡಿದ್ದೆವು! ಆದರೆ ಅವರಿಗೆ ಕಾವೇರಿ ಸಮಸ್ಯೆ ಭಾರತದ್ದೇ ಅಲ್ಲ ಎನಿಸಿತೇನೊ?
ಹಿಂದಿನ ಸಾಧಾರಣ ಪ್ರಧಾನಿಗಳಂತೆಯೇ ರಾಜಕಾರಣದ ನಂಬರ್ ಗೇಮಿಗಾಗಿ ಜಯಲಲಿತಾಳ ಕೈಗೊಂಬೆಯಾದದ್ದು ದೊಡ್ಡ ದುರಂತ!
ಹಿಂದಿನ ಸಾಧಾರಣ ಪ್ರಧಾನಿಗಳಂತೆಯೇ ರಾಜಕಾರಣದ ನಂಬರ್ ಗೇಮಿಗಾಗಿ ಜಯಲಲಿತಾಳ ಕೈಗೊಂಬೆಯಾದದ್ದು ದೊಡ್ಡ ದುರಂತ!
ತಮಿಳುನಾಡಿನಲ್ಲಿ ತನಗೆ ಕವಡೆ ಕಾಸಿನ ಕಿಮ್ಮತ್ತಿಲ್ಲವೆಂದು ತಿಳಿದುಕೊಂಡಿರುವ ಭಾಜಪ, ಇದೇ ಕಾರಣಕ್ಕೆ ಅಲ್ಲಿನ ಪ್ರಾದೇಶಿಕ ಪಕ್ಷಗಳ ಬೆಂಬಲಕ್ಕಾಗಿ ಕಾವೇರಿ ವಿಷಯದಲ್ಲಿ ಕನ್ನಡಿಗರನ್ನು ಬಲಿ ಕಾ ಬಕ್ರಾಗಳನ್ನಾಗಿಸಿಕೊಂಡಿದೆ!
ಈಗಿನ ಪ್ರಧಾನಿ ನರೇಂದ್ರ ಮೋದಿಯದ್ದು ವಿಶೇಷ ವ್ಯಕ್ತಿತ್ವವೆಂದು ಹಾಡಿ ಹೊಗಳಿದ್ದನ್ನೆಲ್ಲಾ ಕೇಳಿ, ಈಗ ಇವರ ಜಾಣ ಕುರುಡತ್ವ ನೋಡಿದರೆ "ದೊಡ್ಡಿಯೊಳಗಿನ ಕುರಿಮಂದೆಯೊಳಗೊಂದು ಕುರಿಯಾದೆ" ಎಂಬ ಸಾಲು ನೆನಪಾಗುತ್ತದೆ! ಎಲ್ಲಾ ಪ್ರಧಾನಿಗಳಂತೆ ಈತನೂ ಓರ್ವ ಸಾಮಾನ್ಯ ಪ್ರಧಾನಿ ಎಂಬುದು ತಿಳಿಯಬೇಕಿದೆ.
ಈಗಿನ ಪ್ರಧಾನಿ ನರೇಂದ್ರ ಮೋದಿಯದ್ದು ವಿಶೇಷ ವ್ಯಕ್ತಿತ್ವವೆಂದು ಹಾಡಿ ಹೊಗಳಿದ್ದನ್ನೆಲ್ಲಾ ಕೇಳಿ, ಈಗ ಇವರ ಜಾಣ ಕುರುಡತ್ವ ನೋಡಿದರೆ "ದೊಡ್ಡಿಯೊಳಗಿನ ಕುರಿಮಂದೆಯೊಳಗೊಂದು ಕುರಿಯಾದೆ" ಎಂಬ ಸಾಲು ನೆನಪಾಗುತ್ತದೆ! ಎಲ್ಲಾ ಪ್ರಧಾನಿಗಳಂತೆ ಈತನೂ ಓರ್ವ ಸಾಮಾನ್ಯ ಪ್ರಧಾನಿ ಎಂಬುದು ತಿಳಿಯಬೇಕಿದೆ.
ಕಾವೇರಿ ವಿಚಾರದಲ್ಲಿ ಪ್ರಭಾವಿತ ಶಕ್ತಿಗಳು ಕರ್ನಾಟಕದ ೧೭-೧೮ ಸಂಸದರು! ನಿಷ್ಪಕ್ಷಪಾತವಾಗಿ ಇದನ್ನು ವಿಶ್ಲೇಷಿಸುತ್ತಾ ಹೋದರೆ, ರಾಜ್ಯ ಸರ್ಕಾರ ವಿಸರ್ಜಿಸಿ ಅಥವ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನ ರಾಜಿನಾಮೆಯಿಂದಾಗಿ ಆಗುವ ಪ್ರಯೋಜನ ಏನೂ ಇಲ್ಲ! ಬದಲಿಗೆ ರಾಜ್ಯದ ಮೇಲೆ ಕೆಟ್ಟ ಪರಿಣಾಮವೇ ಬೀರುತ್ತದೆ! ಮುಖ್ಯಮಂತ್ರಿಯ ರಾಜಿನಾಮೆಯಿಂದಾಗಿ ರಾಜ್ಯದಲ್ಲಿ ಮಾತ್ರ ರಾಜಕೀಯ ಅಸ್ಥಿರತೆ ಉಂಟಾಗಿ ರಾಜ್ಯವು ಕೇಂದ್ರದ ನೇರ ಆಳ್ವಿಕೆಗೆ ಒಳಪಡುವಂತಹ ಹಿನಾಯಮಾನ ಸ್ಥಿತಿಗೆ ತಲುಪಿಬಿಡುತ್ತದೆ. ಆಗ ನೇರವಾಗಿ ರಾಜ್ಯದ ಅಡಳಿತ ಕೇಂದ್ರಕ್ಕೆ ಒಳಪಟ್ಟು ಹೇಗೆಬೇಕೆಂದಾಗಲೆಲ್ಲ, ಯಾವಾಗಲಾದರೂ ತಮಿಳುನಾಡಿಗೆ ನೀರು ಹರಿಸುವ ಪ್ರವೃತ್ತಿ ಬೆಳೆದುಕೊಳ್ಳಬಹುದು.
ಆದರೆ ಸಂಸದರು ರಾಜಿನಾಮೆ ಕೊಟ್ಟರೆ ಅದರ ಕಥೆಯೇ ಬೇರೆ! ಕೇಂದ್ರ ಸರ್ಕಾರದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿ ನರೇಂದ್ರ ಮೋದಿಯೇ ಈ ವಿಚಾರವಾಗಿ ಮದ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವ ಅನಿವಾರ್ಯತೆ ಉಂಟಾಗುತ್ತದೆ!
ಆದರೆ ಇದು ಆಗುವುದಿಲ್ಲವಲ್ಲ?
ನಮ್ಮ ರಾಜ್ಯ ಸಂಸದರಲ್ಲಿ ೧೭-೧೮ ಸಂಸದರು ಮತ್ತು ಕಾಂಗ್ರೇಸೇತರ ಸಂಸದರು ಕೇಂದ್ರದಲ್ಲಿ ಭಾಜಪಾಕ್ಕೆ ಬೆಂಬಲುಸಿದ್ದಾರೆ. ಅದರಲ್ಲಿ ಮಂಡ್ಯದ ಜೆಡಿಎಸ್ ಸಂಸದ ಪುಟ್ಟರಾಜು ರಾಜಿನಾಮೆ ಕೊಟ್ಟು ತಾವು "ಮತದಾರರ ಭಕ್ತ" ಎಂದು ನಿರೂಪಿಸಿದ್ದಾರೆ!
ನಮ್ಮ ರಾಜ್ಯ ಸಂಸದರಲ್ಲಿ ೧೭-೧೮ ಸಂಸದರು ಮತ್ತು ಕಾಂಗ್ರೇಸೇತರ ಸಂಸದರು ಕೇಂದ್ರದಲ್ಲಿ ಭಾಜಪಾಕ್ಕೆ ಬೆಂಬಲುಸಿದ್ದಾರೆ. ಅದರಲ್ಲಿ ಮಂಡ್ಯದ ಜೆಡಿಎಸ್ ಸಂಸದ ಪುಟ್ಟರಾಜು ರಾಜಿನಾಮೆ ಕೊಟ್ಟು ತಾವು "ಮತದಾರರ ಭಕ್ತ" ಎಂದು ನಿರೂಪಿಸಿದ್ದಾರೆ!
ಆದರೆ ಮಿಕ್ಕ ಭಾಜಪಾ ಸಂಸದರು???
ಅವರೆಲ್ಲಾ ಮತದಾರರ ಭಕ್ತರಲ್ಲ! ಮೋದಿಯ ಭಕ್ತರು!
ತಮ್ಮನ್ನು ಸಂಸದರನ್ನಾಗಿಸಿದ ಮತದಾರರಿಗಿಂತ, ತಮ್ಮಿಂದ ಆಯ್ಕೆಯಾದ ಪ್ರಧಾನ ಮಂತ್ರಿ ಮತ್ತು ರಾಷ್ಟ್ರೀಯತೆಯ ಹೆಸರಲ್ಲಿ ಜನರ ಕಣ್ಣಿಗೆ ಮಣ್ಣೆರೆಚುತ್ತಿರುವ ಕೊಳಕು ರಾಜಕಾರಣವೇ ಹೆಚ್ಚಾಯ್ತು ಅವಕ್ಕೆ!
"ನಿಮ್ಮ ಜಾಗದಲ್ಲಿ ನಾನೇನಾದರು ಇದ್ದಿದ್ದರೆ ರಾಜಿನಾಮೆ ಕೊಡುತ್ತಿದ್ದೆ" ಎಂದು ಬೊಗಳೆ ಬಿಡುವ ರಾಜ್ಯದ ಸಂಸದನೊಬ್ಬನಿಗೆ ಪಾಪ! ತಿಳಿದೇಯಿಲ್ಲ ಈ ವಿಚಾರಕ್ಕೆ ಯಾರ ರಾಜಿನಾಮೆಯ ಅವಶ್ಯಕತೆ ಇದೆ ಎಂದು.
ನಿಜಕ್ಕೂ ಇಂದಿನ ದುಸ್ಥಿತಿ ಕನ್ನಡಿಗರಿಗೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಎಷ್ಟಿದೆ ಮತ್ತದರ ಪ್ರಾಮುಖ್ಯತೆ ಏನೆಂಬುದನ್ನು ಮನಗಾಣುವಂತೆ ಮಾಡಿದ್ದರೆ ಒಳಿತು. ಕೇಂದ್ರ ಸರ್ಕಾರದ ಕೀಳಭಿರುಚಿಯ ಧೋರಣೆ, ರಾಜ್ಯ ಸರ್ಕಾರದ ಅಸಹಾಯಕ ಸ್ಥಿತಿ, ಇವೆರಡರ ನಡುವಿನ ಕೆಸರೆರಚಾಟ, ನ್ಯಾಯಾಂಗದ ಮಾರುಕಟ್ಟೆಯಾಗಿರುವ ಭಾರತದ ಹೆಮ್ಮೆಯ ಹುಚ್ಚ ನ್ಯಾಯಾಲಯ ಇವೆಲ್ಲವೂ ಸಾಮಾನ್ಯ ಕನ್ನಡಿಗನಿಗೆ ಒಳ್ಳೆಯ ಟ್ರೀಟ್ಮೆಂಟನ್ನೇ ಕೊಟ್ಟಿದೆ!
ಸದಾ ಪ್ರಾದೇಶಿಕ ಪಕ್ಷಗಳಿಗೇ ಅಧಿಕಾರದ ಗದ್ದುಗೆ ಏರಲು ಸಹಕರಿಸುವ ತಮಿಳುನಾಡು, ಇಂಥ ವಿಚಾರಗಳಲ್ಲಿ ಚಾಣಾಕ್ಷತೆ ಮೆರೆಯುವುದಂತು ನಿಜ!
"ಹೇಯ್ ಪ್ರಧಾನ ಮಂತ್ರಿ, ನೋಡು, ಇಂದು ತೀರ್ಪು ನಮ್ಮ ಪರ ಬರಲಿಲ್ಲವೆಂದಾದರೆ ನಮ್ಮ ರಾಜ್ಯದ, ನಮ್ಮ ಪಕ್ಷದ ಎಂ.ಪಿ.ಗಳೆಲ್ಲ ಪಾರ್ಲಿಮೆಂಟಿಗೆ ರಾಜಿನಾಮೆ ಕೊಟ್ಟು ನಿನ್ನ ಖುರ್ಚಿಯನ್ನೇ ಕೆಡವಿಬಿಡುತ್ತಾರೆ" ಎಂದು ಎಚ್ಚರಿಸಿದರೋ, ಅಥವ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ನಾಜೂಕಾಗಿ ಹೇಳಿದರೋ ಸಾಕು! ಎಂಥದ್ದೇ ವಾದ ಇದ್ದರೂ ಏನೇ ಅನ್ಯಾಯವಾದರೂ ತೀರ್ಪು ತಮಿಳುನಾಡಿನ ಹಿತಾಸಕ್ತಿ ಕಾಯುವಂತದ್ದಾಗಿರುತ್ತದೆ!
ಆದರೆ ಇಂಥಾ ಅವಕಾಶ ಕರ್ಣಾಟಕಕ್ಕೆ ಸಿಗುವುದಿಲ್ಲ! ಏಕೆಂದರೆ ಪ್ರಾದೇಶಿಕ ಪಕ್ಷಗಳ ಬಗ್ಗೆ ಕನ್ನಡಿಗರಿಗೆ ಮಡಿವಂತಿಕೆ ಹೆಚ್ಚು! ಎಷ್ಟೇ ಆದರೂ ನಮ್ಮಲ್ಲಿ ದೇಶಭಕ್ತರು ಹೆಚ್ಚಲ್ಲವೇ?
ಕರ್ನಾಟಕ ಸುಟ್ಟು ಬೂದಿಯಾದರೂ ಪರವಾಗಿಲ್ಲ, ದೇಶ ಉದ್ದಾರವಾಗಬೇಕು ಎನ್ನುವ ಈ ಮತಿಗೇಡಿಗಳಿಗೆ ಪಾಪ! ಕರ್ನಾಟಕವೂ ಭಾರತದಲ್ಲೇ ಇದೆ ಎಂಬುದನ್ನು ಮರೆತಂತಿದೆ.
ಕರ್ನಾಟಕ ಸುಟ್ಟು ಬೂದಿಯಾದರೂ ಪರವಾಗಿಲ್ಲ, ದೇಶ ಉದ್ದಾರವಾಗಬೇಕು ಎನ್ನುವ ಈ ಮತಿಗೇಡಿಗಳಿಗೆ ಪಾಪ! ಕರ್ನಾಟಕವೂ ಭಾರತದಲ್ಲೇ ಇದೆ ಎಂಬುದನ್ನು ಮರೆತಂತಿದೆ.
ಮನೆ ಮನೆಗಳು, ಮನೆಯಲ್ಲಿಯ ಮನಸ್ಸುಗಳು ಚೆನ್ನಾಗಿದ್ದರೆ, ಆ ಇಡೀ ಊರು ಚೆನ್ನಾಗಿರುತ್ತದೆ. ಹೀಗೇ ಊರುಗಳು ಚೆನ್ನಾಗಿದ್ದರೆ ನಾಡು ಸಹ ಚೆನ್ನಾಗಿರುತ್ತದೆ. ನಾಡುಗಳು ಹೀಗೆ ಒಳಿತನ್ನು ಕಂಡರೆ ದೇಶವೂ ಸುಭೀಕ್ಷವಾಗಿರುತ್ತದೆ.
ದೇಶ ಮೊದಲು ಎಂಬುದು "ಅಡಿಪಾಯಕ್ಕಿಂತ ಸೂರು ಮುಖ್ಯ" (Roof is Greater than Basement) ಎಂಬ ದಡ್ಡತನದ ವಾಕ್ಯದಂತಿರುತ್ತದೆ!
ದೇಶ ಮೊದಲು ಎಂಬುದು "ಅಡಿಪಾಯಕ್ಕಿಂತ ಸೂರು ಮುಖ್ಯ" (Roof is Greater than Basement) ಎಂಬ ದಡ್ಡತನದ ವಾಕ್ಯದಂತಿರುತ್ತದೆ!
ಇದು ಒಂದು ರೀತಿ ನೆಲದ ಮೇಲೆ ಅಡಿಪಾಯ ಹಾಕಿ ಮನೆ ಕಟ್ಟುತ್ತೀನಿ ಎನ್ನುವ ಬದಲು ಆಕಾಶಕ್ಕೆ ನನ್ನ ಮನೆಯ ಸೂರನ್ನು ನೇತು ಹಾಕ್ತಿನಿ ಎಂಬಂತೆ!
ಸದ್ಯದ ಕರ್ನಾಟಕದ ಪರಿಸ್ಥಿತಿ ಜನತೆಯಲ್ಲಿ ತಮ್ಮವರು ಯಾರು, ಪರದೇಸಿಗಳ್ಯಾರು, ಹೈಕಮಾಂಡ್ ಗುಲಾಮರು ಯಾರು, ಯಾರು ನಮ್ಮ ಹಿತ ಕಾಯುವಲ್ಲಿ ಸಬಲರು ಎಂದು ಮನದಟ್ಟು ಮಾಡಿಕೊಳ್ಳುವ ಅವಕಾಶ ಕೊಟ್ಟಿದೆ.
ಈಗಲೂ ಬುದ್ಧಿ ಕಲಿಯದಿದ್ದರೆ ಪ್ರಯೋಜನವಿಲ್ಲ!
ಕನ್ನಡ-ಕನ್ನಡಿಗ-ಕರ್ನಾಟಕ ಕೇಂದ್ರಿತ ತತ್ವ ಸಿದ್ದಾಂತ ಉಳ್ಳ ಪ್ರಾದೇಶಿಕ ಪಕ್ಷದ ಅವಶ್ಯಕತೆ ನಿಜಕ್ಕೂ ಬಹಳಷ್ಟಿದೆ. ಅದಕ್ಕೆ ತಕ್ಕಂತೆ ನಡೆಯಲಿ ಕನ್ನಡಿಗನು ಸಾಗುವ ದಾರಿ. ಪ್ರಾದೇಶಿಕ ಪಕ್ಷಗಳ ಉದಯಕ್ಕೆ ನಾಂದಿಯಾಡಲಿ ಈ ಘಟನೆಗಳು. ನಾಡಪರ ಕಾಳಜಿ ಉಳ್ಳವರು ಅಧಿಕಾರದ ಗದ್ದುಗೆ ಏರುವಂತಾಗಲಿ.
ಕನ್ನಡ-ಕನ್ನಡಿಗ-ಕರ್ನಾಟಕ ಕೇಂದ್ರಿತ ತತ್ವ ಸಿದ್ದಾಂತ ಉಳ್ಳ ಪ್ರಾದೇಶಿಕ ಪಕ್ಷದ ಅವಶ್ಯಕತೆ ನಿಜಕ್ಕೂ ಬಹಳಷ್ಟಿದೆ. ಅದಕ್ಕೆ ತಕ್ಕಂತೆ ನಡೆಯಲಿ ಕನ್ನಡಿಗನು ಸಾಗುವ ದಾರಿ. ಪ್ರಾದೇಶಿಕ ಪಕ್ಷಗಳ ಉದಯಕ್ಕೆ ನಾಂದಿಯಾಡಲಿ ಈ ಘಟನೆಗಳು. ನಾಡಪರ ಕಾಳಜಿ ಉಳ್ಳವರು ಅಧಿಕಾರದ ಗದ್ದುಗೆ ಏರುವಂತಾಗಲಿ.
ಸದ್ಯಕ್ಕೆ ನೀರನ್ನು ಉಳಿಸಿಕೊಳ್ಳುವುದರ ಜೊತೆಗೆ ಕಾವೇರಿ ಕೊಳ್ಳದ ಅಣೆಕಟ್ಟುಗಳು ಕೇಂದ್ರದ ಹಿಡಿತಕ್ಕೆ ತಲುಪದಂತೆ ಪ್ರತಿಭಟಿಸಿ ವಿರೋಧಿಸಿಯಾದರೂ ತಡೆಯಬೇಕಿದೆ. ಜೊತೆಗೆ, ಈಗಾಗಲೇ ಕೇಂದ್ರ ಹಿಡಿತಕ್ಕೆ ಒಳಪಟ್ಟಿರುವ ತುಂಗಾಭದ್ರ ಅಣೆಕಟ್ಟನ್ನು ಪುನಃ ನಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದರ ಬಗ್ಗೆ ಯೋಚಿಸಬೇಕಿದೆ. ವಿಕೇಂದ್ರೀಕರಣಕ್ಕಾಗಿ ಹೋರಾಡಬೇಕಿದೆ. ಕೇಂದ್ರದ ಹಿಡಿತದಲ್ಲಿ ರಕ್ಷಣಾ ಖಾತೆ ಮತ್ತು ವಿದೇಶಾಂಗ ಖಾತೆ ಇದ್ದರೆ ಅದೇ ಹೆಚ್ಚು! ಹೀಗಿರುವಾಗ ಕಂಡಕಂಡಲ್ಲೆಲ್ಲಾ ತನ್ನ ಪಾರುಪತ್ಯ ಮೆರೆಸಲು ಮುಂದಾಗಿ ಸರ್ವಾಧಿಕಾರದ ದೋರಣೆ ತಳೆಯಲು ಆರಂಭಿಸುತ್ತಿರುವುದು ದುರಂತ!
ದೇಶದ ಏಕತೆ ಇದು ಎಂದಿಗೂ ಒಳಿತನ್ನು ಉಂಟು ಮಾಡಲಾಗದು. ವಿಕೇಂದ್ರೀಕರಣ ಸಾಧ್ಯವಾಗದಿದ್ದರೆ ದೇಶ ಹೊಡೆದು ಚೂರುಗಳಾಗುವುದಂತು ಖಚಿತ!
ಈ ಸಮಸ್ಯೆಗಳಿಗೆಲ್ಲಾ ಪೂರ್ಣವಿರಾಮವಾಗಿ ವಿಕೇಂದ್ರೀಕರಣದ ಅವಶ್ಯಕತೆಯು ಇದೆ.
ದೇಶದ ಏಕತೆ ಇದು ಎಂದಿಗೂ ಒಳಿತನ್ನು ಉಂಟು ಮಾಡಲಾಗದು. ವಿಕೇಂದ್ರೀಕರಣ ಸಾಧ್ಯವಾಗದಿದ್ದರೆ ದೇಶ ಹೊಡೆದು ಚೂರುಗಳಾಗುವುದಂತು ಖಚಿತ!
ಈ ಸಮಸ್ಯೆಗಳಿಗೆಲ್ಲಾ ಪೂರ್ಣವಿರಾಮವಾಗಿ ವಿಕೇಂದ್ರೀಕರಣದ ಅವಶ್ಯಕತೆಯು ಇದೆ.
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ